BBMP News – A Report

ಮೂರು ಕಟ್ಟಡ ನೆಲಸಮ ಇಂದು

 
 

ಬೆಂಗಳೂರು: ಉತ್ತರಹಳ್ಳಿಯಲ್ಲಿ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಲಾದ ಮೂರು ಅಪಾರ್ಟ್‌ಮೆಂಟ್‌ ಕಟ್ಟಡಗಳನ್ನು ಗುರುವಾರ ನೆಲಸಮ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಮುನಿರಾಜು ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ನಕಲಿ ಖಾತಾ, ಕಟ್ಟಡ ನಕ್ಷೆ ಹಾಗೂ ಕಾರ್ಯ ಆರಂಭ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು ಎಂದು ದೂರಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹಬಾಬು, ಸಹಾಯಕ ಎಂಜಿನಿಯರ್‌ಗಳಾದ ದೇವೇಗೌಡ, ಲಿಂಗರಾಜೇಗೌಡ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಮುನಿರಾಜು ತಿಳಿಸಿದರು.

Scroll to Top

Discover more from ECO PACK

Subscribe now to keep reading and get access to the full archive.

Continue reading